Search This Blog

Saturday, June 17, 2017

ಜಾಸ್ತಿ ಅಪಾಯ ಯಾವುದು..?


ಕುಡುಕನೊಬ್ಬ ಹಾಡ ಹಗಲೇ ಪ್ರೊಫೆಸರೊಬ್ಬರಲ್ಲಿ ತಗಲಿ ಹಾಕಿಕೊಂಡ.
ಅವರು ಕೇಳಿದರು " ಅಲ್ಲಯ್ಯಾ, ನೀನೇ ಹೇಳು, ನೀರು ಜಾಸ್ತಿ ಅಪಾಯಾನಾ? ಶರಾಬು ಜಾಸ್ತಿ ಅಪಾಯವಾ? ..?"
ಶರಾಬಿಯೆಂದ "ನಿಸ್ಸಂಶಯವಾಗಿಯೂ ನೀರೇ!!"
ಯಾಕೆ ಹಾಗೆ ಹೇಳುವಿ?" ಕೇಳಿದರಿವರು.
"ಈಗ ನೋಡಿ" ಕುಡುಕನೆಂದ
"ಕಳೇದ ವರ್ಷ ಶರಾಬು ಕುಡಿದು ಎಷ್ಟು ಜನ ಸತ್ತರು ಗೊತ್ತಿದೆಯಾ ನಿಮಗೆ? ....ಬರೇ ನೂರು ಜನರು ಅಷ್ಟೇ!,
ಆದರೆ ಅದೇ ನೆರೆಯಿಂದಾಗಿ ಅದರ ಹತ್ತು ಪಟ್ಟು ಜನರು ಸತ್ತಿದ್ದಾರೆ ಗೊತ್ತಾ?.... ಹಾಗಿರುವಾಗ.....ನೀರೇ ಜಾಸ್ತಿ ಅಪಾಯ ಕಾರಿ ಅಂತ ಆಯ್ತಲ್ಲಾ?"

ಹಣ ಇಡೋ ಜಾಗ..?


ತ್ಯಾಂಪಿ: ಅಲ್ಲಾರಿ ಏನು ಮಾಡೋದೋ ಗೊತ್ತಾಗ್ತಾ ಇಲ್ಲ. ನಿಮ್ ಮಗ ನಾನು ಎಲ್ಲಿ ಹಣ ಇಟ್ರೂ ತೆಗೆದು ಬಿಡ್ತಾನೆ..
ತ್ಯಾಂಪ: ನಿಂದೇ ಮಗ ...ನಂಗೂ ಅದೇ ಸಮಸ್ಯೆ ಇತ್ತು ಅಲ್ವಾ..? ಎಲ್ಲಿಟ್ರೂ ಕ್ಷಣಾರ್ಧದಲ್ಲಿ ನೀನೂ ಮಾಯ ಮಾಡ್ತಿದ್ದೆ..?
ತ್ಯಾಂಪಿ: ಏನಂದ್ರೀ..
ತ್ಯಾಂಪ: ಅಲ್ಲಾ, ಹೌದೂ ಅದೇ ಆಲೋಚನೆ ಮಾಡ್ತಾ ಇದ್ದೆ, ಎಲ್ಲಾ ನಿನ್ ಹಂಗೇ ಇದ್ದಾನೆ ಅಂದೆ..
ತ್ಯಾಂಪಿ : ಅದಿರಲಿ, ಈಗ ಏನು ಮಾಡೋದೂ ಹೇಳಿ..
ತ್ಯಾಂಪ : ಒಂದುಪಾಯ ಮಾಡು..
ತ್ಯಾಂಪಿ: ಏನದು ಬೇಗ ಹೇಳಿ..
ತ್ಯಾಂಪ: ಮರಿ ತ್ಯಾಂಪನ ಪಠ್ಯ ಪುಸ್ತಕದಲ್ಲಿ ಅಡಗಿಸಿ ಇಟ್ಟರೆ..?
ತ್ಯಾಂಪಿ: ಹೇಳಿ ಕೇಳಿ.... ಅವನ್ ಕೈಗೇ ಕೊಡೋದಾ..?
ತ್ಯಾಂಪ: ಹೌದು ಅಲ್ಲೇ ಅಡಗಿಸಿ ಇಡು.. ಅವನಂತೂ ಪುಸ್ತಕ ಮುಟ್ಟಿ ಕೂಡಾ ನೋಡಲ್ಲ..

International Peace day

ತ್ಯಾಂಪಿ : ರ್ರೀ . ಕೇಳಿದ್ರಾ . . . ?
ತ್ಯಾಂಪ : . . ಹೌದು . . ಕರೆಕ್ಟ್ . !!
ತ್ಯಾಂಪಿ : ಅರೇ . . ನಾನೇನೂ ಹೇಳೇ ಇಲ್ಲವಲ್ಲ . . . ??!!??
ತ್ಯಾಂಪ : ನೀನೇನು ಹೇಳ್ತೀಯೋ . ಅದು ಸರಿಯಾಗೇ ಇರುತ್ತೆ ಬಿಡು . . ಡಾರ್ಲಿಂಗ್ . .
ಅಂತಾರಾಷ್ಟ್ರೀಯ ಶಾಂತಿ ಕಾಪಾಡೋ . . . ದಿನದ ಶುಭಾಶಯಗಳು

ಉಪ್ಪಿನ ಡಬ್ಬಿ ಎಲ್ಲಿ..?


ತ್ಯಾಂಪಿ ಊಟ ಮಾಡುತ್ತಿದ್ದವಳು ತ್ಯಾಂಪನನ್ನು ಕರೆದಳು
ರೀ ಇಲ್ಲಿ ಬನ್ರಿ
ಬರಲೇ ಬೇಕಲ್ಲ ಬಂದ ಆ ಬಡಪಾಯಿ..
ಒಳಗೆ ಅಡುಗೆ ಕೋಣೆಗೆ ಹೋಗಿ ಸ್ವಲ್ಪ ಉಪ್ಪು ತೆಗೆದುಕೊಂಡು ಬನ್ನಿ..
ಹೋಗಿ ನಿಮಿಷ ಐದಾಯ್ತು ಹತ್ತಾಯ್ತು ....
ಹುಡುಕಿದ ಹುಡುಕಿದ ಹುಡುಕುತ್ತಾ....ಎಷ್ಟು ತಲೆ ಕೆರೆದುಕೊಂಡರೂ ಆತನಿಗೆ ಉಪ್ಪು ಸಿಗಲೇ ಇಲ್ಲ..
ಅಲ್ಲಿಂದಲೇ ಪತ್ನಿಯನ್ನು ಕರೆದು ಕೇಳಿದ ಲೇ ಇವಳೇ ಎಲ್ಲಿದೆಯೇ ಇಲ್ಲಿ - ಈ ಕಸದ ಕೋಣೆಯಲ್ಲಿ ಅಲ್ಲಲ್ಲ ಅಡುಗೆ ಕೋಣೆಯಲ್ಲಿ ಉಪ್ಪಿನ ಡಬ್ಬಿ..?
ಕಾಣ್ತಾನೇ ಇಲ್ಲ..?
ತ್ಯಾಂಪಿ ಉರಿದು ಬಿದ್ದಳು
ಏನ್ ಗಂಡಾ... ರೀ ನೀವು ಅಲ್ಲಾ ಚಿನ್ನ ಬೆಳ್ಳಿನಾ... ಬರೇ ಉಪ್ಪು ಕೇಳಿದೆ ನಾನು ಅದೂ ಅಡುಗೆ ಮನೆಯಿಂದಾ ಅದೂ ನಿಮ್ ಕೈಯ್ಯಲಿ ತರೋಕೆ ಆಗಲ್ಲ...
ಇಡೀ ದಿನ ಆ ಹಾಳು ಮೋಬಾಯಿಲ್ಲು ಕೈಲಿ, ಆ ಅಪ್ಪು ಈ ಅಪ್ಪು, ಆ ಪುಸ್ತಕದ ಮುಖ ಪಕ್ಕದ ಮನೆಯವರ ಮುಖ ಅಷ್ಟೆ ನಿಮ್ಮ ಕೈಲಿ ನೋಡೋಕ್ಕೆ ಆಗೋದು
ನೀವು ಮತ್ತು ನಿಮ್ಮ ಆ ಕೆಲಸಕ್ಕೆ ಬಾರದ ಸ್ನೇಹಿತರು...
ಹಾಳು ಗೊಡ್ಡು ಹರಟೆ ಬಿಟ್ಟು ಇನ್ನೇನಾದ್ರೂ ಮಾಡ್ತೀರಾ ನೀವೆಲ್ಲಾ..
ನಿಮ್ಮ ಈ ಕೈಲಾಗದ ತನದ ಕೆಲ್ಸ ನನಗೆ ಗೊತ್ತೂ ರೀ..
ಅದಕ್ಕೇ ನಾನು ಮೊದಲೇ ಅಡುಗೆ ಮನೆಯಿಂದ ಉಪ್ಪಿನ ಡಬ್ಬಿ ತಂದು ನನ್ನ ಹತ್ರಾನೇ ಇಟ್ಟುಕೊಂಡಿದ್ದೇನೆ..ಇಕಾ..
ನಿಮ್.....
...................................
# #
ತ್ಯಾಂಪ... ಪಾಪ!!!!

ಹುಟ್ಟು ಹಬ್ಬದ ಗಿಫ್ಟ್


ತ್ಯಾಂಪಿ: ನೀನು ನನ್ನ ಅಮ್ಮನಿಗೆ ಅವಳ ಹುಟ್ಟು ಹಬ್ಬಕ್ಕೆ ಯಾವ ಗಿಪ್ಟ್ ಕೊಡ್ತೀಯಾ..?
ತ್ಯಾಂಪ: ನಾನಾ ..? ಅವಳಿಗೊಂದು ಕ್ರಿಕೆಟ್ ಬ್ಯಾಟ್ ಕೊಡ್ತೀನಿ..
ತ್ಯಾಂಪಿ: ಆದರೆ ಅಮ್ಮ ಕ್ರಿಕೆಟ್ ಎಲ್ಲಿ ಆಡ್ತಾಳೆ..?
ತ್ಯಾಂಪ: ನನ್ನದೇನು ಭಗವದ್ ಗೀತೆ ಓದೋ ವಯಸ್ಸಾ..?
ತ್ಯಾಂಪಿ: ಯಾಕೆ ಎನಾಯ್ತೀಗ..?
ತ್ಯಾಂಪ: ಯಾಕೆ ನನ್ನ ಹುಟ್ಟು ಹಬ್ಬಕ್ಕೆ ನಿನ್ನಮ್ಮ ಏನು ಕೊಟ್ಟಿದ್ದರು ಗೊತ್ತಲ್ಲ ನಿಂಗೆ..?
ತ್ಯಾಂಪಿ: ಇಲ್ಲ ಏನು ಕೊಟ್ಟಿದ್ದಳು
ತ್ಯಾಂಪ: ಭಗವದ್ ಗೀತಾ..?

ಮೂಗು ತೂರಿಸೋ... ನೀತಿ ..


ಪಾರ್ಕ್ ಬೆಂಚಿನಲ್ಲಿ ಕುಳಿತು
ತನ್ನದೇ ಗುಂಗಿನಲ್ಲಿ ಮರಿತ್ಯಾಂಪ ಚಾಕಲೇಟ್ ಮುಕ್ಕುತ್ತಿದ್ದ.
ಒಂದಾಯ್ತು ಎರಡಾಯ್ತು ಮೂರಾಯ್ತು ನಾಲ್ಕಾಯ್ತು..
ಅವನಲ್ಲಿದ್ದ ಚಾಕಲೇಟ್ ಗಳ ಸಂಖ್ಯೆ ಕಮ್ಮಿಯಾಯ್ತೇ ವಿನಃ
ಅವನ ಬಾಯ್ ಚಪಲ ಕಮ್ಮಿಯಾಗಲೇ ಇಲ್ಲ
ಪಾರ್ಕನ ಅದೇ ಬೆಂಚನ ಪಕ್ಕದಲ್ಲಿ ಕುಳಿತಿರೋ ವೃದ್ಧರೊಬ್ಬರು
ಅವನನ್ನು ಕೇಳಿದರು...
"ಹೀಗೆ ಚಾಕಲೇಟ್ ತಿನ್ನುತ್ತಾ ಇದ್ದರೆ ನಿನ್ನ ಹಲ್ಲುಗಳ ಕಥೆ ಏನಾಗುತ್ತೆ ಗೊತ್ತಾ..?"
"ನನ್ನ ಮುತ್ತಜ್ಜ ನೂರಾ ಇಪ್ಪತ್ತು ವರ್ಷ ಬದುಕಿದ್ದರು ಗೊತ್ತಾ..?"
"ಯಾಕೆ ಅವರೂ ಚಾಕಲೇಟ್ ತಿಂತಾ ಇದ್ದರಾ..?"
ಮುದುಕರಿಗೆ ಆಶ್ಚರ್ಯ..??
"ಅಲ್ಲ ಅವರಿಗೆ ಇನ್ನೊಬ್ಬರ ವಿಷಯದಲ್ಲಿ ಮೂಗು ತೂರಿಸೋ ಅಭ್ಯಾಸ ಇದ್ದಿರಲಿಲ್ಲ.."..
ಮರಿತ್ಯಾಂಪ ಯಾವಾಗಲೂ ಎರಡು ತಲೆಮಾರು ಮುಂದಿರ್ತಾನೆ.......

ಒಂದೆ ಕಾರಣ

ಒಂದೆ ಕಾರಣ
ಇಬ್ಬರು ಮಾತನಾಡುತ್ತಿದ್ದರು.
ಒಬ್ಬ: ನಾನು ಹೊರಗಡೆ ತಿನ್ನುವುದು, ಮನೆ ತೊಳೆಯುವುದು,ಇಸ್ತ್ರಿ ಮುಂತಾದ ಕೆಲಸಗಳಿಂದ ಬೇಸತ್ತು ಮದುವೆಯಾದೆ.
ಇನ್ನೊಬ್ಬ: ಪರಮಾಶ್ಚರ್ಯ, ನಾನೂ ಇವೇ ಕೆಲಸಗಳಿಂದ ಬೇಸತ್ತು ವಿಛ್ಚೇದನ ಪಡೆದಿದ್ದೆ.
2
ಸಾಯೋ ಮಾರ್ಗ
ಸಾಯಲು ತುಂಬಾ ಮಾರ್ಗಗಳಿವೆ : ವಿಷ, ನಿದ್ರೆಯ ಮಾತ್ರೆ, ನೇಣು, ದೊಡ್ಡ ಕಟ್ಟಡದಿಂದ ಹಾರುವುದು, ರೈಲ್ವೇ ಹಳಿಯ ಮೇಲೆ ಮಲಗುವುದು, ಆದರೆ ಕೆಲವರಿಗೆ ಮದುವೆ: ನಿಧಾನ ಅದರೂ ಖಂಡಿತ