Search This Blog

Tuesday, June 29, 2010

ಶಿಸ್ತಿನ ಕೋಟೆಯಲ್ಲೊಂದು ಬಿರುಕು

   ೩. ಪಂಥಾಹ್ವಾನ:

ಆದಿನ ರವಿವಾರ, ಬಾಕಿ ದಿನಗಳ ಹಾಗೆ ಇಲ್ಲಿ ಅಷ್ಟೇನೂ ಸಿಶ್ತಿನ ಮಿಲಿಟರಿಯ ದಿರುಸು ತೊಡಬೇಕೆಂಬ ಆದೇಶವಿಲ್ಲ , ಆದರೆ ನಮ್ಮ ಸೀನಿಯರ್ ತನ್ನ ಹೆಚ್ಚುಗಾರಿಕೆಗಾಗಿ ಎಲ್ಲರಿಗೂ ಆದೇಶ ಕೊಡುತ್ತಾನಷ್ಟೇ, ವಿನಹ. ಅಲ್ಲದೇ ಪ್ರತಿದಿನದ ಕರಾರುವಾಕ್ಕಾದ ಬದ್ಧತೆಯ ಕಾರ್ಯಕ್ರಮವಿಲ್ಲ.ಸ್ವಲ್ಪವಾದರೂ ಬಿಡುವಿರಬಹುದು ಅಂತ ಅಷ್ಟೇ. ನನಗೇನೂ ಸಾಮಾನ್ಯ ಧಿರುಸು ತೊಡಲೇ ಬೇಕೆಂದೇನೂ ಇಲ್ಲದಿದ್ದರೂ ಮಿಲಿಟರಿ ಧಿರುಸು ತೊಟ್ಟರೆ ಅದು ON DUTY ಅಂತ ಆಗಿ " ಸ್ವತಂತ್ರ್ಯ " ವಾಗಿ ಇರುವುದಕ್ಕೆ ಆಗಲ್ಲ ಅಷ್ಟೇ.ಅಲ್ಲವಾದರೆ ಅಲ್ಲಿ ಎಲ್ಲರೂ "ಅಂಕಲ್ ಮತ್ತು ಬಯ್ಯ" ರೇ ಆದುದರಿಂದ ....

(ಇಲ್ಲಿ ಎರಡು ಜೋಕ್ ನೆನಪಿಗೆ ಬರ್ತಾ ಇದೆ ಮೊದಲಿನದ್ದು ನೈಜ ಕಥೆ. ಆಗ ನಾವು ಮುಂಬಯಿಲ್ಲಿದ್ದೆವು. ನನ್ನ ಮೊದಲ ಮಗ ಆಗ ೩-೪ ವರುಷ ಪ್ರಾಯ ಆತನಿಗೆ. ನಾವು ಎಲ್ಲಿಯೇ ಇರಲಿ ನಮ್ಮ ರವಿವಾರ ಮಾತ್ರ ಕನ್ನಡದವರಿಗೆ ಮೀಸಲು. ಅಲ್ಲಿನ ಮಿಲಿಟರಿಯವರಾದ ಶೇಖರ್ ಚಂದ್ರೂ ಮುಂತಾದ ಹುಡುಗರು ನಮ್ಮ ಮನೆಗೆ ಬರುತ್ತಿದ್ದರು. ಆಗ ಕನ್ನಡದವರು ಜಾಸ್ತಿ. ನನ ಹುಡುಗ ಗುಂಡಗೆ ಮುದ್ದು ಮುದ್ದಾಗಿ ಯಾರು ನೋಡಿದರೂ ಕಣ್ಣಿಗೆ ತಾಕುವ ಹಾಗೆ ಇದ್ದ. ಎಲ್ಲರ ಜತೆ ಬೆರೆಯುತ್ತಿದ್ದ ಕೂಡಾ. ಹೀಗೇ ಒಮ್ಮೆ ಅವನನ್ನು ಚಂದ್ರೂ ತನ್ನ ಜತೆ ಕರಕೊಂಡು ಹೋದ ಅವನ ಬ್ಯಾರಕ್ ಗೆ. ಸ್ವಲ್ಪ ಸಮಯದ ಬಳಿಕ ಬಂದವ " ಮಮ್ಮೀ ಅಲ್ಲಿ ಬರೇ ಅಂಕಲ್ ಮಾತ್ರ ಇದ್ದಾರೆ , ಒಂದೇ ಒಂದು ಆಂಟೀನೂ ಇಲ್ಲ್ ಎಂದಿದ್ದ, ನಾವು ನಕ್ಕಿದ್ದೆವು
ಇನ್ನೊಂದು ,
ಒಂದು ಗಂಡಸಿನಲ್ಲಿ ಪ್ರಪಂಚದಲ್ಲಿ ಹೆಂಗಸರೇ ಇಲ್ಲದಿದ್ದರೆ ನೀವು ಯಾವ ಉಡುಪು ತೊಡುತ್ತಿದ್ದೀರಿ ಎಂತ ಪ್ರಶ್ನೆ ಕೇಳಿದ್ದಕ್ಕೆ , ಹೆಂಗಸರು ಇಲ್ಲದೇ ಹೋದರೆ ಯ್ಯಾರು ಉಡುಪು ತೊಡುತ್ತಾರೆ ಮೇಡಮ್ ಎಂದಿದ್ದರಂತೆ.)

ನಾನು ಇದ್ದುದರಲ್ಲಿಯೇ ಉತ್ತಮ ಉಡುಪು ಧರಿಸಿ ಹೊರ ಬಂದಿದ್ದೆ.
ನಮ್ಮ ಸೀನಿಯರ ದೂರದಿಂದಲೇ ನನ್ನ ನೋಡಿ ಹತ್ತಿರ ಕರೆಸಿ ಕೊಂಡ " ಯಾಕ್ರೀ ಸಿವಿಲ್ ನಲ್ಲಿದ್ದೀರಾ ಎಂತ ಕೇಳಿದ.
ನೀವೇನು ನನಗೆ ಮೊದಲು ಹೇಳಿದ್ದಿರಾ ಮಿಲಿಟರಿ ದಿರುಸಿನಲ್ಲಿ ಬರಲು" ಎಂದು ಕೇಳಿದೆ.
ಅವನು ಏನೂ ಅನ್ನುವ ಮೊದಲೇ ಕಮಾಂಡೆಂಟ್ ಕರೀತಾರಂತೆ ಅನ್ನುವ ಆದೇಶ ಬಂದು ಬಿಟ್ಟಿತು. ಆತ ನನ್ನನ್ನೇ ತೀಕ್ಷ್ಣವಾಗಿ ನೋಡುತ್ತಾ ನೋಡಿದೆಯಾ?
ಇದೆ ನಿನಗೆ ಗೃಹಚಾರ ಎಂದ. ನಾನು ಇದ್ದ ಹಾಗೆಯೇ ಅಲ್ಲಿಂದ ಕಮಾಂಡೆಂಟ್ ನತ್ತ ನಡೆದೆ.ಜತೆಯಲ್ಲೇ ನನ್ನ ಸೀನಿಯರ್ರೂ.
ಜೀಪ್ ತಲುಪಿ, ಸೆಲ್ಯೂಟ್ ಕೊಟ್ಟು "ಸರ್ ಇದೇ ದಿರುಸು ಇರಲಾ ಅಥವಾ ನೀವು ಸಮಯ ಕೊಟ್ಟರೆ ಕೂಡಲೇ ಮಿಲಿಟರಿ ಧಿರುಸು ತೊಟ್ಟು ಬರುತ್ತೇನೆ "ಎಂದೆ .
"ಬೇಡಬೇಡ ಹಾಗೇ ಬಾ" ಎಂದನಾತ.
ನಾನು ಜೀಪ್ ಹತ್ತಿದೆ, ನನ್ನ ಸೀನಿಯರ್ ಗೆ ನೀನು ಬರುವುದು ಬೇಡ ಎಂಬಂತೆ ಸನ್ನೆ ಮಾಡಿದರು ಕಮಾಂಡೆಂಟ್.
ಜೀಪು ಹೊರಟಿತು.
ಕಮಾಂಡೆಂಟ್ ಕರ್ನಲ್, ಸರ್ದಾರ್ಜಿ.
ನನ್ನ ನೋಡಿ ನೋಡಿ ಒಂದು ಅರ್ಜೆಂಟ್ ಕೆಲಸವಿದೆ, ಅದನ್ನು ಮುಗಿಸಲು ನಿಮಗೆ ೨೪ ಗಂಟೆ ಕಾಲಾವಕಾಶವಿದೆ.
ನಿಮ್ಮ ಅನುಭವ ಮತ್ತು ಕಾರ್ಯ ಕ್ಷಮತೆಯ ಪರೀಕ್ಷೆ ಅಂದು ಕೊಳ್ಳಿ, ಎಂದರಾತ.
ಕೆಲಸ ಏನು ಹೇಳಿ ಸರ್ ಎಂದೆ. ಹೇಳುವುದಲ್ಲ ತೋರಿಸುತ್ತೇನೆ ಎಂದರು ಆತ.


ದೊಡ್ಡ ಪರ್ವತದ ಬದಿಯಿಂದ ಹಾದು ಹೋಗುತ್ತಿತ್ತು ನಮ್ಮ ಜೀಪು.
ಪಕ್ಕದಲ್ಲಿ ಕೆಳಗೆ ತೀರಾ ಕೆಳಗೆ ಸಿಂಧೂ ನದಿ ಬೆಳ್ಳಗೆ ಜುಳುಜುಳು ಹರಿಯುತ್ತಿದ್ದಳು ,
ನಮಗೆ ಕೈ ಹಾಕಲೂ ಅಸಾಧ್ಯ ಚಳಿ ಇರುವ ಆ ನೀರಿನಲ್ಲಿ ಅಲ್ಲಿನ ಹೆಂಗಸರು ಬಟ್ಟೆ ತೊಳೆಯುತ್ತಿದ್ದರು.
ಮರ ಗಿಡಗಳು ಅಷ್ಟಾಗಿ ಕಾಣ ಸಿಗುವುದಿಲ್ಲ ಇಲ್ಲಿ.
ನನ್ನ ಇಲ್ಲಿಯವರೆಗಿನ ಸರ್ವಿಸ್ ಬಗ್ಗೆ ಕೇಳಿ, ನನ್ನಂತಹವರು ತಮ್ಮ ಯುನಿಟಿಗೆ ಅಗತ್ಯ ಅಂತಲೂ ನನ್ನೆಲ್ಲಾ ಅನುಭವಗಳ ಆಧಾರದ ಮೇಲೆ ಬಹಳಷ್ಟು ಕೆಲಸ ಕಾರ್ಯಗಳನ್ನು ಮಾಡಬಹುದೆಂತಲೂ ನನ್ನ ಅಟ್ಟಕ್ಕೇರಿಸಿದ ಆತ.

ಇದೊಂದು ಇವರ ಜಾಣತನ.
ಅವರ ಕೆಲ್ಸ ಮಾಡಿಸಿಕೊಳ್ಳುವುದು ಒಂದಾದರೆ, ಜೊಳ್ಳು ಮತ್ತು ಕಾಳು ಬೇರ್ಪಡಿಸುವದೂ ಇದರಲ್ಲಿ ಸೇರಿರುತ್ತದಲ್ಲ (ಇದಿರಿರುವನವನನ್ನು ಅಳೆಯುವ ಪರಿ).

ಅಂತೂ ಜಾಗಕ್ಕೆ ಬಂದು ಸೇರಿದೆವು, ನಮ್ಮದು ಇಂಜಿನಿಯರ್ ಯುನಿಟ್ ಆದುದರಿಂದ ಇಲ್ಲಿನ ಒಂದು ಹೊಸದಾಗಿ ಬಂದ ಸಿಗ್ನಲ್ ಯುನಿಟೊಂದಕ್ಕೆ ಆಫೀಸು ಸರಂಜಾಮು ಹೊಂದಿಸುವ ಕೆಲಸ ನಮ್ಮ ಸುಫರ್ಧಿಯಲ್ಲಿ ಬಂದಿತ್ತು.
ಅದಕ್ಕೆಂದೇ ಸಿವಿಲ್ ಇಂಜಿನಿಯರ್ ಆದ ನನ್ನನ್ನು ಕರೆದಿದ್ದರು.
ಮುಂದಿನ ಇಪ್ಪತ್ನಾಲ್ಕು ಘಂಟೆಯ ಒಳಗೆ ಆಅವರ ಆಫೀಸನ್ನು ಸರಿಪಡಿಸಿ ಕೊಡಬೇಕಾಗಿತ್ತು. ಗಾರೆಯ ಕೆಲಸ ಸುಣ್ಣ ಬಣ್ಣ ಹೊಡೆಯುವ ಕೆಲಸ ಮತ್ತು ವಿದ್ಯುತಕೆಲಸವೂ ಸೇರಿಸಿ ಒಟ್ಟಾರೆಯಾಗಿ ೨೪ ಘಂಟೆಗಳವಳಗೆ ಎಲ್ಲವನ್ನೂ ಮಾಡಿಕೊಡಬೇಕಾಗಿತ್ತು. ಎಲ್ಲವೂ ಸರಿಯಾಗಿ ಸಿಕ್ಕಿದ್ದಲ್ಲಿ...
ನನಗೆ ಬೇಕಾದ ಸಾಮಾನು ಸಿಕ್ಕಿದಲ್ಲಿ ನಾನು ೨೦ ಗಂಟೆ ಯಲ್ಲೇ ಮಾಡಿಕೊಡುತ್ತೇನೆ ಸರ್ ಎಂದಿದ್ದೆ ನಾನು ಸ್ಥಿರವಾದ ದನಿಯಲ್ಲಿ .

ಆದರೆ ಅಂತಹಾ ಲೇಹ್ ಗುಡ್ಡದ ಬಳಿಯಲ್ಲಿ ಬೇಕಾದ ಸಾಮಾನು ಸರಂಜಾಮು ಹೊಂದಿಸುವುದು ಹೇಗೆ?
ಅವರು ಹೇಳಿದ್ದಕ್ಕೆಲ್ಲಾ ತಲೆಯಾಡಿಸಿದೆ. ಆದಿನ ರವಿವಾರ ಬೇರೆ.
ನಮ್ಮ ಕಮಾಂಡೆಂಟ್ ನನ್ನನ್ನು ಪಕ್ಕಕ್ಕೆ ಕರೆದು ನನಗೆ ಬೇಕಾದ ಎಲ್ಲಾ ವಸ್ತುಗಳ ಪಟ್ಟಿ ತಯಾರಿಸಿಕೊಳ್ಳಲು ತಿಳಿಸಿದ.
ನಾನು ಕೂಡಲೇ ತಯಾರಿಸಿದೆ. ಅದನ್ನು ಸೀದಾ ಅಲ್ಲಿಂದ ಯುನಿಟಿಗೆ ಬಂದು ಸೀನಿಯರ್ ಗೆ ಪಟ್ಟಿ ಕೊಟ್ಟೆ.
ಆತ ಹೇಳಿದ ಅದೆಲ್ಲಾ ಸರಿ ನಿನಗೆ ಇಡೀ ಲೇಹ್ ಪಟ್ಟಣ "out of bond" ಹೇಗೆ ಸಾಮಾನು ತೆಗೆದುಕೊಳ್ಳುತ್ತೀ,
ಯಾವಾಗ ನೀನು ಸಾಮಾನು ತರುವುದು ಮತ್ತು ಇದನ್ನು ಕಂಪ್ಲೀಟ್ ಮಾಡುವುದು ಅದೇನು ನಿನ್ನ ಬೆಂಗಳೂರು ಅಂದ್ಕೊಂಡ್ಯಾ,ಮುಗಿಯಿತು ನಿನ್ನ ಕಥೆ, ಇಲ್ಲಿ ಮಾಡಿ ತೋರಿಸು , ಅಂತ ನೋಡೋಣ ಅಹ್ವಾನ ಕೊಟ್ಟು
ಲೇವಡಿ ಮಾಡಿದ.
ಕಾರಣ ವೆಂದರೆ ಇಲ್ಲಿಯ ಹಾಗೆ ಬೇಕಾದ ಹಾಗೆ ಪೇಟೆಗೆ ಹೋಗಿ ತರಲಾಗುವುದಿಲ್ಲವಲ್ಲ , ಇದ್ದ ಸಾಮಾನಲ್ಲೇ ಹೊಮ್ದಿಸಿಕೊಮ್ದು ಕೆಲಸ ಮಾಡಬೇಕು , ನಮ್ಮಲ್ಲಿ ಏನಿದೆ ಏನಿಲ್ಲ ಎನ್ನುವುದು ತಿಳಿದುಕೊಳ್ಳದೆ ನಾನು ಮಾತು ಕೊಟ್ಟು ಬಿಟ್ಟೆನಲ್ಲ ಆ ಆಫಿಸರ್ ಗೆ , ಅಂದರೆ ನನ್ನ ಮಾತು ಉಳಿಸಿಕೊಳ್ಳಲು ಆಗುವುದಿಲ್ಲ ಅಂತ ಇತನಿಗೆ ಖುಷಿ .

Monday, June 28, 2010

ಸಿಪಾಯಿ ಸದಾ ಸಿದ್ಧ!!!

೧. ಅನುಕರಣ
ಸದಾ ಸಿದ್ಧ
ಯುದ್ಧ ಸನ್ನದ್ಧ
ಬಿಸಿಲಲ್ಲಿ, ಮಳೆಯಲ್ಲಿ
ಚುಮುಚುಮು ಬೆಳಕಲ್ಲಿ, ಕಟಗುಡುವಚಳಿಯಲ್ಲಿ,
ಶಿಸ್ತಿನ  ನಡಿಗೆ
ಗೈರತ್ತಿನ ದರ್ಪ  ಶಿಷ್ಟಾಚಾರ
ನಿಷ್ಟುರ ನಡವಳಿಕೆಯ ಶಿಕ್ಷೆಯ ಚೌಕಟ್ಟು
ಒಗ್ಗಟ್ಟಿನ,ಮುಂದಾಳುತ್ವದ ಸೂತ್ರ ಕಲಿಕೆ
ಕೃಮಬದ್ದ ಅನುಕರಣೆಯ ಸೂತ್ರದ ಬೊಂಬೆ
ಜೀವನುದ್ದಕ್ಕೂ, ಅಣಕು ಯುದ್ಧಕ್ಕೂ
ದೇಶ ಪ್ರೇಮ, ಕರ್ತವ್ಯ ನಿಷ್ಠೆ
ನಿಜಕ್ಕೂ...   ಸಿಪಾಯಿ
ಸದಾ  ಸಿದ್ಧ
ಯುದ್ಧ   ಸನ್ನದ್ಧ


೨.  ಅನುಸರಣ

ಮಲಗಿ  ಸೂರೆಣಿಸುವಾಗ
ಮೊಂಬತ್ತಿಯ  ಬೆಳಕಿಗೂ  ಕರಗಿ
ತೊಟ್ಟಿಕ್ಕುವ  ಮಂಜುಗಲ್ಲುಗಳು,
ತಿನ್ನಲೂ,  ಅರಗಿಸಲೂ ತಿಣುಕಾಡಬೇಕಾದ ಪರಿಸ್ಥಿತಿ
ಮೈಯ್ಯ  ಮೂಳೆಮಜ್ಜೆಗಳೂ  ಕರಗುವಂತಿಹ ಚಳಿಯ ಪಾಶ
ಕೃಶವಾಗಿ ನಿರ್ವರ್ಣವಾಗುತ್ತಿರುವ ದೇಹ
ಆದರೂ ಸಿಪಾಯಿ ಸದಾ ಸಿದ್ಧ

ಮಳೆಯಲ್ಲೋ ಬಿಸಿಲಲ್ಲೋ
ಬರದಲ್ಲೋ ನೆರೆಯಲ್ಲೋ
ಸಹಾಯ ಹಸ್ತದ ಮಹಾಪೂರ
ಕರ್ತವ್ಯನಿಷ್ಠೆಯ ಸಾಕಾರ
ಸಾವಿಗೂ ಜೀವನಕ್ಕೂ ಇರುವ
ಕ್ಷಣಗಳ  ಅಂತರದರಿವು ಅನುದಿನ  ಪ್ರತಿಕ್ಷಣ
ತನ್ನವರ ವಿರಹದುರಿಯ
ಕಣ್ಣಾಳದ ನೋವಿನಲ್ಲೂ
ಬಿಡುವಿಲ್ಲದ ಶ್ರಮದಲ್ಲೂ
ಸಿಪಾಯಿ ಸದಾ  ಸಿದ್ಧ
ಯುದ್ಧ   ಸನ್ನದ್ಧ



೩.  ಅನುಭೋಗ (ವಾನಪ್ರಸ್ಥ)

ಸ್ವಾರ್ಥ  ಸಾಧಕರ ನಡುವೆ
ಮರೆತ ಬದುಕಿನ ವಿದ್ಯೆ
ಬೊಗಸೆ ತುಂಬದ ಖುಶಿಯ
ಪ್ರೀತಿಯ ಎಲ್ಲೆಯಲ್ಲಿ
ಕಾನೂನಿನ ಚೌಕಟ್ಟು
ಮನದ ನಿರ್ವರ್ಣ ಘಾಯದಲ್ಲಿ
ಸವೆದೀತು ಬದುಕು
ಯುದ್ಧ  ವಿರಾಮದಲ್ಲಿ
ವಿಷಣ್ಣ  ಬದುಕಿನ
ಚರಮ  ಗೀತೆಯಲ್ಲಿ

ಸಿಪಾಯಿ ಸದಾ ಸಿದ್ಧ!!!
ಅದರೆ...... ಇಲ್ಲಿ
(ತನ್ನವರಲ್ಲೇ)

ಯುದ್ಧ ನಿಶಿದ್ಧ!!

ನಿಜವಾದ ಬಾಸ್ ಹೇಗಿರಬೇಕು...?

ಅದೊಂದು ದೊಡ್ಡ ಪ್ರೊಜೆಕ್ಟ್. ಸುಮಾರು ೭೦ ಜನ ವಿಜ್ಞಾನಿಗಳು ಅವಿರತ ಶ್ರಮಿಸುತ್ತಿದ್ದಾರೆ, ಹಗಲೂ ರಾತ್ರಿ, ತುಂಬಾನೆ ವಿಶೇಷ, ಮತ್ತು ಗೌಪ್ಯದ ಕಾರ್ಯವಾದುದರಿಂದ, ಅವರೆಲ್ಲರ ಮೇಲೆ ಕೆಲಸದ ಮತ್ತು ಅವರ ಬಾಸ್ನ ಮಾನಸಿಕ ಒತ್ತಡವೂ ಜಾಸ್ತಿಯೆ ಇದೆ. ಆದರೆ ಅವರೆಲ್ಲರೂ ಅವರ ಬಾಸ್ ನ ಮೇಲಿನ ಗೌರವಾದರದಿಂದಅಂತಹಾ ಮಾನಸಿಕ ಒತ್ತಡದ ನಡುವೆಯೂ ಕೆಲಸ ಬಿಟ್ಟು ಹೋಗುವ ಯೋಚನೆ ಕೂಡಾ ಮಾಡುತ್ತಿಲ್ಲ.

ಹೀಗಿರುವಾಗ ಒಂದು ದಿನ ಬೆಳಿಗ್ಗೆ ಒಬ್ಬ ವಿಜ್ಞಾನಿ ಬಾಸ್ ಬಳಿ ಬಂದು " ಸರ್ ನಾನು ಇವತ್ತು ನನ್ನ ಮಕ್ಕಳನ್ನು "ಪ್ರದರ್ಶಿನಿಗೆ" ಕರೆದು ಕೊಂಡು ಹೋಗುತ್ತೇನೆಂತ ಮಾತು ಕೊಟ್ಟು ಬಂದಿದೇನೆ ಅದಕ್ಕೇ ಮನೆಗೆ ೫:೩೦ ಕ್ಕೆ ಹೋಗ ಬೇಕಾಗಿದೆ" ಎಂದು ಕೇಳಿಕೊಂಡ. ಅದಕ್ಕೆ ಬಾಸ್ ಮನೆಗೆ ಬೇಗ ಹೋಗಲು ಆತನಿಗೆ ಒಪ್ಪಿಗೆ  ಕೊಟ್ಟರು.

ಆತ ತನ್ನ ಕೆಲಸದಲ್ಲಿ ಮಗ್ನನಾದ. ಮಧ್ಯಾಹ್ನದ ಊಟ ಮುಗಿಸಿ ಪುನಃ ಆತ ಕೆಲ್ಸಕ್ಕೆ ಕುಳಿತ. ಆತ ತನ್ನ ಕೆಲ್ಸದಲ್ಲಿ ಎಷ್ಟು ಮಗ್ನನಾದ, ಎಂದರೆ ಅದು ಇನ್ನೇನು ಮುಗಿಯಿತು ಎನ್ನುವಾಗ ಆತ ತನ್ನ ಕೈಗಡಿಯಾರದ ಕಡೆ ಗಮನ ಹರಿಸಿದ, ಸಮಯ ೮:೩೦!! ಅಕಾಸ್ಮಾತ್  ಆಗ  ಅವನಿಗೆ ಬೆಳಿಗ್ಗೆ ತಾನು ಮಕ್ಕಳಿಗೆ ಕೊಟ್ಟಿದ್ದ ಮಾತು ನೆನಪಿಗೆ ಬಂತು
ಆತ ತಲೆಯೆತ್ತಿ ತನ್ನ ಬಾಸ್ ನ ಕಡೆ ನೋಡುತ್ತಾನೆ, ಬೆಳಿಗ್ಗೆ ಯೇ ಆತ ಒಪ್ಪಿಗೆ ಕೊಟ್ಟಾಗಿತ್ತಲ್ಲ!! ಬಾಸ್  ಚೇಂಬರ್ ಖಾಲಿ !!.
ಮನದ ತುಂಬಾ ತಪ್ಪಿತಸ್ಥ ಬಾವನೆ ತುಂಬಿಕೊಂಡಾತ ಮನೆಗೆ ತಲುಪುತ್ತಾನೆ. ಮನೆಯಲ್ಲಿ ಹೆಂಡತಿಯೊಬ್ಬಳೇ ಹಾಲ್ ನಲ್ಲಿ ಯಾವುದೋ ಪೇಪರ್ ಓದುತ್ತಾ ಕುಳಿತ್ತಿದ್ದಳು, ಮಕ್ಕಳ ಸುಳಿವೇ ಇಲ್ಲ.

 ಮಹಾ ಸ್ಫೋಟಕ ಸನ್ನಿವೇಶ, ಈಗಿನ  ತನ್ನ  ಒಂದು ತಪ್ಪು ಮಾತು ಕೂಡಾ ತಿರುಗುಬಾಣ ವಾಗ ಬಲ್ಲುದು ಎಂದರಿತಿದ್ದ.
ಹೆಂಡತಿ ಇವನತ್ತ ದೃಷ್ಠಿ ಬೀರಿ  "ಈಗ ಕಾಫಿ ಮಾಡಲೋ ಅದವಾ ಹಸಿದಿದ್ದರೆ ಊಟ ಬಡಿಸಲೋ" ಎಂದು ಕೇಳಿದಳು.
ಈತನೆಂದ" ನಿನಗೆ ಕಾಫಿ ಸರಿಯೆಂದಾದರೆ ನನಗೂ ಕೂಡಾ, ಆದರೆ ಮಕ್ಕಳೆಲ್ಲಿ?"
" ನಿನಗೆ ಗೊತ್ತಿಲವಾ? ನಿನ್ನ ಮೆನೇಜರ್ ಬಂದಿದ್ದರು, ೫:೧೫ ಕ್ಕೆ, ಮಕ್ಕಳನ್ನು ಅವರು ಕರೆದೊಯ್ದರು"  ಎಂದಳು ಆಶ್ಚರ್ಯದಿಂದ!!

ನಿಜವಾಗಿಯೂ ಏನಾಗಿತ್ತು ಎಂದರೆ.. ಇವನಿಗೆ ಒಪ್ಪಿಗೆ ಕೊಟ್ಟ ಈತನ ಬಾಸ್ ಗಂಟೆ ಐದರಿಂದ ಈತನನ್ನು ಗಮನಿಸುತ್ತಿದ್ದರು, ಈತನ ಗಮನವು ಕೆಲಸದಲ್ಲಿ ಸಂಪೂರ‍್ಣವಾಗಿ ಕೇಂದ್ರೀಕೃತವಾದುದನ್ನು ಗಮನಿಸಿದವರಿಗೆ, ಈತನ ಮಕ್ಕಳು ಏಕೆ ತಮ್ಮ ಅಧಿಕಾರದಿಂದ ವಂಚಿತರಾಗಬೇಕು ಎನ್ನಿಸಿ ತಾವೇ ಅವರನ್ನು ಕರೆದೊಯ್ಯುವ ನಿರ್ಧಾರವನ್ನು ಅಮಲಿಗೆ ತಂದರು.
ಬಾಸ್ ಇಂತಹ ಕಾರ್ಯಗಳನ್ನು  ಮಾಡಲೇ ಬೇಕೆಂದಿಲ್ಲ, ಮಾಡಿದರೆ  ಮಾತ್ರ     ಅದರ ಫಲಿತಾಂಶ ವರ್ಣನಾತೀತ......

ಇಂತಹಾ ಬಾಸ್ ನ್ನು ಹೊಂದಿದ್ದ  " ತುಂಬಾ " ಪ್ರೊಜೆಕ್ಟ್  ಅತೀ ಮಾನಸಿಕ ಒತ್ತಡಗಳ ನಡುವೆಯೂ ಯಶಸ್ವೀ ಶಿಖರವನ್ನೇರಿತು.


ಅಂದ ಹಾಗೆ ಈ ಮೇಲಿನ ಬಾಸ್ ಯಾರಿರಬಹುದು?  .

ಅವರೇ ನಮ್ಮ  ಪೂರ್ವ ರಾಷ್ಟ್ರಪತಿ ಎ.ಪಿ ಜೆ ಅಬ್ದುಲ್ ಕಲಾಮ್

Saturday, June 26, 2010


ಒಬ್ಬ ವ್ಯಾಪಾರಿ ದಿವಾಳಿಯಾಗುವ ಸ್ಥಿತಿ ತಲುಪಿದ್ದ.
ಸಾಲಗಾರರ ಕಾಟ ಆತ ತಡೆಯಲಾರದೇ ಹೋದ. ಇವೇ ತನ್ನ ಬದುಕಿನ ಕೊನೆಯ ದಿನಗಳಂತೆ ಅನ್ನಿಸಿತು ಅವನಿಗೆ. ಬೇರೆ ದಾರಿಯೇ ಕಾಣದೇ ಒಂದು ಪಾರ್ಕ ನ ಬೆಂಚಿನ ಮೇ ಲೆ ತನ್ನ ಎರಡೂ ಕೈಗಳನ್ನು ತಲೆಯ ಮೇಲಿಟ್ಟು ಕುಳಿತಿದ್ದ,  ಸಹಾಯದ ಏನಾದರೂ ಹೊಸ ಕಿರಣ ಸಿಗಬಹುದೇ ಎಂದು ಯೋಚಿಸುತ್ತಾ....
ಅಕಾಸ್ಮಾತ್ತಾಗಿ ಒಬ್ಬ ವೃದ್ಧ ಆತನೆದುರಿಗೆ ಬಂದು ಕೇಳಿದ " ಏನು ... ತುಂಬಾ ಚಿಂತೆಯಲ್ಲಿರೋ ಹಾಗಿದೆ?"
ಈತ ತನ್ನ ಕಷ್ಟಗಳನ್ನೆಲ್ಲಾ ಅವನಿಗೆ ತಿಳಿಸಿದ.
ತುಂಬಾ ಸಮಾಧಾನದಿಂದ ಕೇಳಿದ ವೃದ್ಧ " ನಾನು ನಿನಗೆ ಸಹಾಯ ಮಾಡ ಬಲ್ಲೆ ಎನ್ನಿಸುತ್ತಿದೆ" ಎಂದ
ಈತನ ಹೆಸರು ಕೇಳಿದ ವೃದ್ಧ ಒಂದು ಚೆಕ್ ಬರೆದು ಆತನ ಕೈಗಿತ್ತು ಹೇಳಿದ " ಇಗೋ ಇದನ್ನು ತೆಗೆದುಕೋ, ಇವತ್ತಿಂದ ಸರಿಯಾಗಿ ಒಂದು ವರುಷದ ಬಳಿಕ ನಾವು ಇದೇ ಜಾಗದಲ್ಲಿ ಸಿಗೋಣ, ಆಗ ನೀನು ಈ ಹಣ ನನಗೆ ವಾಪಾಸ್ಸು ಕೊಟ್ಟರೆ ಸಾಕು" ಎಂದ.
ಆತ ಹೇಗೆ ಬಂದಿದ್ದನೋ ಹಾಗೇ ವಾಪಾಸ್ಸು ಹೋದ.
ಈತ ತನ್ನ ಕೈಯ್ಯಲ್ಲಿದ್ದ ಚೆಕ್ ನೋಡಿದ, ಅದು ೫,೦೦,೦೦ ಡಾಲರ್ ಚೆಕ್, ರುಜು ಹಾಕಿದಾತ ಆಗಿನ ಅತ್ಯಂತ ದೊಡ್ಡ ಶ್ರೀಮಂತರ ಸಾಲಿನ ಜೋನ್ ಡಿ ರಾಕ್ ಫೆಲ್ಲರ್.
"ನನ್ನ ಜೀವನದ ಅತ್ಯಂತ ಯಾತನಾಮಯ ದಿನಗಳು ತೊಲಗಿದವು" ಈತನೆಂದುಕೊಂಡ,
ಆದರೆ ಆತನು ಆತ ಈ  ಚೆಕ್ಕನ್ನು ತನ್ನ ತಿಜೋರಿಯಲ್ಲಿಯೇ ಇಟ್ಟುಕೊಂಡು, ಅದು ತನ್ನ ಬಳಿಯಿದೆ ಎನ್ನುವ ಯೋಚನೆಯೇ ತನಗೆ ತನ್ನ ಬುಸಿನೆಸ್ ನಲ್ಲಿ ಈ ದುರ್ವಿಧಿಯಿಂದ ಪಾರಾಗಲು ಏನಾದರೊಂದು ಹೊಸ ಯೋಚನೆ ಹೊಳೆಸೀತು ಎಂದುಕೊಂಡ.
ಅದು ಹಾಗೆಯೇ ಆಯ್ತು, ಆತನ ಈ ಹೊಸ ಆಲೋಚನೆಯೇ ಆತನ ವ್ಯಾಪಾರೀ ಮನೋಭಾವನೆಯನ್ನು  ಎದ್ದೇಳಿಸಿ ಹೊಸ ಶಕ್ತಿ ತುಂಬಿತು ಮತ್ತು ಕೆಲವೇ ತಿಂಗಳಲ್ಲಿ ಆತ ತನ್ನ ಹಳೆಯ ಸಾಲದಿಂದ ಮುಕ್ತನಾಗಿದ್ದ, ಮತ್ತು ಆತನ ಲಾಭ ದ್ವಿಗುಣವಾಗತೊಡಗಿತು.
ಸರಿಯಾಗಿ ಒಂದು ವರುಷದ ಬಳಿಕ ಆತ ಅದೇ ಪಾರ್ಕನಲ್ಲಿ ಹಳೆಯ ಚೆಕ್ ಹಿಡಿದುಕೊಂದು ಆ ವೃದ್ಧನಿಗಾಗಿ ಕಾಯುತ್ತಿದ್ದ. ಹೇಳಿದ ಸಮಯಕ್ಕೆ ಸರಿಯಾಗಿ ಆ ವೃದ್ಧ ಹಾಜರಾಗಿದ್ದ.
ಆದರೆ ಇನ್ನೇನು ವ್ಯಾಪಾರಿ ತನ್ನ ಏಳಿಗೆಯ ಕಥೆ ಅವನಿಗೆ ಹೇಳಿ ಧನ್ಯವಾಅದಾ ಸಮರ್ಪಿಸಿ ಅವನ  ಚೆಕ್ ವಾಪಾಸು ಕೊಡಬೇಕೆಂದು ಕೊಂಡಿದ್ದ.
ಅಷ್ಟರಲ್ಲಿ ಒಬ್ಬ ದಾದಿ ಓಡುತ್ತ  ಬಂದು ಆ ವೃದ್ಧನನ್ನು ಹಿಡಿದುಕೊಂಡಳು.
"ಅಂತೂ ನಾನು ಅವನನ್ನು ಹಿಡಿದು ಬಿಟ್ಟೆ, ಆತನು ನಿಮಗೇನೂತೊಂದರೆ ಕೊಡಲಿಲ್ಲ  ತಾನೇ, ಆತ ವೃದ್ಧಾಶ್ರಮದಿಂದ ತಪ್ಪಿಸಿಕೊಂಡು ಬಂದು ತಾನು ಶ್ರೀಮಂತ ಜೋನ್ ಡಿ ರಾಕ್ ಫೆಲ್ಲರ್ ಎಂದೇ ಹೇಳುತ್ತಾನೆ" ಹೇಳಿ ಆಕೆ ಆತನನ್ನು ತನ್ನ  ಜತೆ ಕರೆದೊಯ್ದಳು.
ವ್ಯಾಪಾರಿ ಸ್ಥಂಭೀಭೂತನಾದ.
ಹಾಗಾದರೆ ಇಡೀ ಒಂದು ವರ್ಷ ತನ್ನ ವ್ಯಾಪಾರವನ್ನು ಉತ್ತುಂಗಕ್ಕೇರಿಸಿದ್ದು ತನ್ನ ಹತ್ತಿರವಿದ್ದ  ಈ ೫ ಲಕ್ಷದ ಚೆಕ್ಕೇ ಅಲ್ಲವೇ.
ಆಗಲೇ ಆತನಿಗೆ ಅರಿವಾದದ್ದು ತನ್ನ ವ್ಯಾಪಾರದ ಏಳಿಗೆಗೆ ಕಾರಣ ತನ್ನ ಹತ್ತಿರವಿದ್ದ ಹಣವಲ್ಲ,
ಬದಲು ಆತನನ್ನು ಹೊಸದಾಗಿ ಹೊಸ ರೀತಿ ಯೋಚಿಸಲು ಪ್ರೇರೇಪಿಸಿದ್ದ ಮಾನಸಿಕ ಶಕ್ತಿ  ಆತನ ನಂಬುಗೆ.

(ನೆಟ್ ಕಥೆ  ಆಧಾರಿತ)
ಈ ಇಂಜಿನೀಯರ್ ನುಡಿಯುವುದು ನಿಜವಾದಲ್ಲಿ ನಿಜವಾಗಿಯೂ ಇದೋದು ಅತೀ ಭಯಂಕರ ಮತ್ತು ದಾರುಣ ಕಲ್ಪನಾತೀತ ದೃಶ್ಯ!! ಇಲ್ಲಿದೆ ಅವನ  ಹೇಳಿಕೆ!!!!





ಮೆಕ್ಸಿಕೋದಲ್ಲಿ ನಡೆದ ತೈಲ ದುರಂತದ ಬಗ್ಗೆ ನೀವೆಲ್ಲಾ ತಿಳಿದೇ ಇದ್ದೀರಿ, ಆದರೆ ಅದು ನಿಜವಾಗಿಯೂ ಈ ದುರಂತ ಎಷ್ಟು ದೊಡ್ಡದು ಮತ್ತು ಅದರ ಪರಿಣಾಮ ಎಷ್ಟು ಭೀಕರ  ಎನ್ನುವಕಲ್ಪನೆ ನಿಮಗ್ಯಾರಿಗೂ ಪ್ರಾಯಶಃ ಇರಲಾರದು. ಮೊದಲ ಸತ್ಯ, ಮೊದಲ ಅಂದಾಜು ಸುಮಾರು ದಿನಕ್ಕೆ ಐದು ಸಾವಿರ ಗ್ಯಾಲನ್ ಕಚ್ಚಾ ತೈಲ ಸಾಗರಕ್ಕೆ ಸೇರುತ್ತಿದೆ ಎಂದರು.

ಈಗ ಅವರೇ ,ಅಲ್ಲ  ಎರಡು ಲಕ್ಷ ಗ್ಯಾಲನ್ ಗಳು ಅನ್ನುತ್ತಿದ್ದಾರೆ ಅಂದರೆ ಒಂದು ವಾರಕ್ಕೆ ಹದಿನಾಲ್ಕು ಲಕ್ಷ ಗ್ಯಾಲನ್  ಕಚ್ಚಾ ತೈಲ ಸಾಗರಕ್ಕೆ ಸೇರುತ್ತಿದೆ ಎಂದ ಹಾಗಾಯ್ತು.

ನಾನೊಬ್ಬ ೨೫ ವರ್ಷದ ಅನುಭವ ಹೊತ್ತ ಇಂಜಿನೀಯರ್,  ನಾನು ತುಂಬಾ ದೊಡ್ಡದೊಡ್ಡ ಕಂಪೆನಿಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಾಯಶಃ ಅದಕ್ಕೇ ನಾನು ಇದರ ಬ್ರಹತ್ತತೆಯನ್ನು ಊಹಿಸಿಕೊಳ್ಳಬಲ್ಲೆ.
ಮೊದಲಿನದಾಗಿ ಈ ಬಿ ಪಿ ಕಂಪೆನಿಯ "ಆಳ ಕೊರೆತ" ಎಂದರೆ ಸುಮಾರು ೫ ಸಾವಿರ ಅಡಿಗಳಷ್ಟು ಆಳದಲ್ಲಿ. ಮತ್ತು ಅಲ್ಲಿಂದ ಮತ್ತೆ ಸುಮಾರು ೩೦ ಸಾವಿರ ಅಡಿಗಳಷ್ಟು ಆಳಕ್ಕೆ ಕೊರೆಯುವರು, ಅಂದರೆ ಭೂಮಿಯ ಹೊರ ಪದರದಿಂದಲೂ ಒಳಕ್ಕೆ,ನಮ್ಮಲ್ಲಿನ ಇಲ್ಲಿಯವರೆಗಿನ ಯಾಂತ್ರಿಕತೆಯು ತಲುಪಲಾಗುವಷ್ಟು. ಈ ಸಾರಿ ಅವರು ಕುಟುಕಿದ ಜಾಗದಲ್ಲಿನ ಕಚ್ಚಾ ತೈಲದ ಒತ್ತಡ ಎಷ್ಟಿತ್ತೆಂದರೆ ಅದು ಅವರ ಎಲ್ಲಾ ಸುರಕ್ಷಾ ಕವಾಟಗಳನ್ನೂ ಒಡೆದು
ಅವರ ಕೊರೆಯುವ ರಿಗ್ ಗಳನ್ನೂ ಧ್ವಂಸ ಮಾಡಿ ಮುಳುಗುವಂತೆ ಮಾಡಿತ್ತು. ಈ ಸ್ಥಿತಿಯನ್ನೊಮ್ಮೆ ಮನನ ಮಾಡಿಕೊಳ್ಳಿ, ಈ ತೈಲದ ಒತ್ತಡವೆಷ್ಟಿತ್ತೆಂದರೆ ನಮ್ಮ ಇಲ್ಲಿಯವರೆಗಿನ ಎಲ್ಲಾ ಸುರಕ್ಷಾ ಯಂತ್ರೋಪಕರಣಗಳೂ ಮತ್ತು ನಮ್ಮ ಇಲ್ಲಿಯವರೆಗಿನ ಈ ತೈಲದ ಚಿಮ್ಮುವಿಕೆ ( ಪ್ರಸರಣ)ಯನ್ನು ನಿಲ್ಲಿಸಲು ಮಾಡಿದ ಪ್ರಯತ್ನಗಳೆಲ್ಲವನ್ನೂ ಅದು ನಿಷ್ಕಿಯವನ್ನಾಗಿಸಿದೆ.
ಈ ರಂದ್ರ ೫ ಸಾವಿರ ಅಡಿ, ಸಾಗರದಾಳದಲ್ಲಿದ್ದು ದಿನಕ್ಕೆ ಎರಡು ಲಕ್ಷ ಲೀಟರ್ ಕಚ್ಚಾ ತೈಲವನ್ನು ಸಮುದ್ರಕ್ಕೆ ಸೇರಿಸುತ್ತಿದೆ.

ಈಗ  ಅವರು ಸಮುದ್ರದಾಳದ ರಂದ್ರ ಮುಚ್ಚಲು ೫ ಸಾವಿರ ಅಡಿ ಯಲ್ಲಿದ್ದ ಭಗ್ನ ರಿಗ್ ನ್ನು ತೆಗೆಯಬೇಕು,
ಭಗ್ನ ರಿಗ್ ನ್ನು ತೆಗೆಯಲೇ ವರ್ಷಗಟ್ಟಲೆ ಸಮಯ ಹಾಗೂ ಕೋಟಿಗಟ್ಟಲೆ ಹಣ ಬೇಕಾದೀತು.
ಅದಲ್ಲ ವಿಷಯ ಸಮುದ್ರದಾಳದಲ್ಲಿನ ಆ  ಕೆಸರುರಂದ್ರ ಮುಚ್ಚುವುದು ಹೇಗೆ? ಸಾಧ್ಯವೇ ಇಲ್ಲ!!!ಸಾಧ್ಯವೇ ಇಲ್ಲ!!!
ನಾನು ತಮಾಷೆ ಮಾಡುವುದಲ್ಲ, ಇದನ್ನು ಮುಚ್ಚಲು ಅಣು ಬಾಂಬೇ ಉಪಯೋಗಿಸ ಬೇಕಾದೀತು,ಆ ರಂದ್ರವನ್ನು ಮುಚ್ಚಲು, ಆದರೆ ಇದಾವುದೂ ಕಾರ್ಯ ಸಾಧು ಉಪಾಯವಲ್ಲ.

ಈ ರಂದ್ರವನ್ನು ಮುಚ್ಚಲು ಸಾಧ್ಯವಾಗದೇ ಹೋದಲ್ಲಿ ಈ ತೈಲ ಪ್ರಸರಣ ಇಡೀ ಸಾಗರ ಪ್ರಪಂಚವನ್ನೇ ನಾಶ ಮಾಡಬಲ್ಲಂತಹದು. ಒಮ್ಮೆ ಯೋಚಿಸಿ ಬರೇ ಒಂದು ಕ್ವಾರ್ಟ( ೦.೯೧೪ ಮಿ ಲೀ) ತೈಲ ಎರಡೂವರೆ ಲಕ್ಷ ಲೀಟರ್ ನೀರನ್ನು ವಿಷಮಯ ಮಾಡುತ್ತಾ ಸಾಗರದ ಜೀವಿಗಳನ್ನು ನಾಷ ಮಾಡುತ್ತದೆ, ಈಗ ನಿಮಗೆ ಇದರ ಬ್ರಹತ್ತತೆ ಅರ್ಥವಾಗುತ್ತಿದೆಯೇ?

ನಮ್ಮ ಕಲುಷಿತಮನದ ರಾಜಕೀಯ ಧುರೀಣರ ತಮ್ಮ  ತಪ್ಪು ಮುಚ್ಚಲು ಹರಡಿಸುವಂತಹ  ಕುಹಕ ಮಾತು ಮತ್ತು ಹಗರಣಗಳನ್ನೇ ನೋಡುತ್ತಾ ದಿನ  ಕಳೆಯುವ ನಮಗೆ ಪ್ರಾಯಶ: ಇಲ್ಲಿಯವರೆಗಿನ ಮನುಕುಲದ ಬಹು ದೊಡ್ಡದುರಂತದತ್ತ ಸಾಗುತಿರುವೆಂಬ ಅರಿವಿದೆಯೇ?
ಈ ತೈಲ ದುರಂತ ಮತ್ತು ಹರಡುವಿಕೆ ಎಲ್ಲಿಯವರೆಗೆನಿಲ್ಲಿಸಲಾಗುವುದಿಲ್ಲವೋ ಅಲ್ಲಿಯವರೆಗೆ ಇದು ಸಾಗರದ ಜೀವಿಗಳ ಸಂಪೂರ್ಣ ನಾಶದ ಹೊಣೆ ಹೊತ್ತುಕೊಂಡಿರುತ್ತದೆ, ಯಾರಿಗೆ ಗೊತ್ತು ಆ ರಂದ್ರದಡಿಯಲ್ಲಿನ ತೈಲ ಸರೋವರದ ಗಾತ್ರ?

ನಮ್ಮ ವಾತಾವರಣದಲ್ಲಿನ ಆಮ್ಲಜನಕದ ಪ್ರಮಾಣವನ್ನು ಸರಿದೂಗಿಸಲು ಈ ಸಾಗರ ಎಷ್ಟು ಮಹತ್ವದ್ದೆಂಬುದು ನಿಮಗೆ ತಿಳಿದೇ ಇದೆ.

ಈ ವಿನಾಶ ತಪ್ಪಿಸಲು ದೇವರೇ ಬರಬೇಕೇನೋ, ಮನುಷ್ಯರಿಂದಲಂತೂ ಸಾಧ್ಯವೇ ಇಲ್ಲ ಇದು.


ಚಿತ್ರ ಕ್ರಪೆ :

(W: MOST  SCARY  EMAIL YOU HAVE READ......... pass  it on (source not validated))